Thursday, December 10, 2009

ಯಾವಾಗ ಮುಕ್ತಿ?

ಅನೇಕ ಚಾನಲ್ ಗಳು ಶುರುವಾಗಿದ್ದೆ ಮೆಗಧಾರಾವಾಹಿಗಳ ಮೂಲಕ ವೀಕ್ಷಕರನ್ನು ಸೆಳೆಯಬಹುದು ಎನ್ನುವ ಸರಳ ಲೆಕ್ಕಾಚಾರದಿಂದ. ಧಾರಾವಾಹಿಯನ್ನು ಸಹಜತೆಗೆ ಹತ್ತಿರವಾಗಿ ತೋರಿಸುವ ಪರಿಕಲ್ಪನೆ ಹುಟ್ಟು ಹಾಕಿದವರಲ್ಲಿ ಟಿ.ಏನ್.ಸೀತಾರಾಮ್ ಪ್ರಮುಖರು. ಅವರ ನಿರ್ದೇಶನದಲ್ಲಿ ಮೂಡಿಬಂದ ಮಾಯಾಮೃಗ ದೂರದರ್ಶನದಲ್ಲಿ ಕ್ರಾಂತಿಯನ್ನು ಮಾಡಿದಂತಹ ಧಾರಾವಾಹಿ. ಮಾಯಾಮೃಗ ಪ್ರಸಾರವಾಗುತ್ತಿದ್ದ ಕಾಲದಲ್ಲಿ ನಾನು ಹೈಸ್ಕೂಲಿನಲ್ಲಿದ್ದಿರಬಹುದು. ಆರರಿಂದ ಅರಾವತ್ತರವರೆಗಿನ ಎಲ್ಲರನ್ನು ಟಿವಿ ಎಂಬ ಮಾಯಪೆಟ್ಟಿಗೆಯ ಮುಂದೆ ೪:೩೦ ರಿಂದ ೫:೦೦ ಗಂಟೆಯವರೆಗೆ ಕೂರಿಸುತ್ತಿದ್ದಂತಹ ಸಾಧನೆ ಮಾಯಾಮೃಗದ್ದು. ಅಲ್ಲಿಂದೀಚೆಗೆ ಧಾರಾವಾಹಿಗಳ ಪ್ರವಾಹ ಚಾನಲ್ ಗಳಲ್ಲಿ  ಹರಿದಿದೆ......ಹರಿಯುತ್ತಿದೆ.
 
ಮಾಯಾಮೃಗದ ಯಶಸ್ಸಿನ ನಂತರ ಪ್ರತಿಬಿಂಬ, ಮನ್ವಂತರ, ಮುಕ್ತ, ಮುಕ್ತ ಮುಕ್ತ ವರೆಗೆ TNS ಅವರ ಪ್ರತಿಭೆ ಅನಾವರಣಗೊಂಡಿದೆ. ಕೆಲವು ತಿಂಗಳುಗಳಿಂದ ಮುಕ್ತ ಮುಕ್ತ ಧಾರಾವಾಹಿಯನ್ನು ತಪ್ಪದೆ ವೀಕ್ಷಿಸುತ್ತಾ ಇದ್ದೀನಿ. ಮೊದಲು ಆಸಕ್ತಿಯುತವಾಗಿದ್ದದ್ದು ಈಗ್ಯಾಕೋ ಬೇಸರ ಮೂಡಿಸುತ್ತ ಇದೆ. ಅದಕ್ಕೆ ಪ್ರಮುಖ ಕಾರಣಗಳು ಹೀಗಿವೆ.

1. ಧಾರಾವಾಹಿಯ ಕೇಂದ್ರ ಬಿಂದು ಆಗಿರುವ ಮಾಲತಿ ಮೇಡಂ ಸಂಸಾರಕ್ಕೆ TNS ಅವರು ಅತೀವ ಕಷ್ಟ ಕೊಡ್ತಾ ಇದಾರೆ . ಧಾರಾವಾಹಿ ಕಂತುಗಳನ್ನು ಎಳೆಯೋದಿಕ್ಕೆ ಸರದಿ ಪ್ರಕಾರ ಒಬ್ಬರ ನಂತರ ಒಬ್ಬರಿಗೆ ಅಥವಾ ಅವರಿಗೆ ಸಂಬಂಧಿಸಿದವರಿಗೆ ಸಮಸ್ಯೆಗಳ ಸೃಷ್ಟಿ. ಪ್ರಪಂಚದಲ್ಲಿ ಹಿಂದೆ ಇದ್ದಿರಬಹುದಾದ, ಈಗ ಇರುವ, ಮುಂದೆ ಬರುವ ಎಲ್ಲ ಸಮಸ್ಯೆಗಳಿಗೆ ಈ ಪರಿವಾರದವರು ಆಹುತಿಯಾಗಿದ್ದಾರೆ. ಹಾಗಾಗಿ ಈ ಸಂಸಾರದಲ್ಲಿ ಗೆಲುವಾಗಿದ್ದವರ್ಯಾರು ಇಲ್ಲ. ಎಲ್ಲ ಅಳುಬುರುಕು ಮುಖಗಳೇ. ಬಾಡಿದ ಮುಖದ ನಟನೆ ಮಾಡಿ ಮಾಡಿ ನಟರೆಲ್ಲ ಸುಸ್ತಾಗಿದ್ದಾರೆ. ಹೇಳಿದ್ದೆ ಡೈಲಾಗ್ ಹೇಳಿ ಹೇಳಿ ಅವರಿಗೂ ಬೇಜಾರಾಗಿದೆ. ಹಾಗಾಗಿ ವಿಷಾದ ದುಃಖದ ಸನ್ನಿವೇಶಗಳಲ್ಲಿ ಮತ್ತಷ್ಟು ದುಃಖಿತರಾಗಿ ಕಾಣುತ್ತಾರೆ. ಅಪರೂಪಕ್ಕೆ ಬರುವ ಹಾಸ್ಯ ಸನ್ನಿವೇಶಗಳನ್ನು ಅವರೆಲ್ಲ ತುಂಬಾ ಎಂಜಾಯ್ ಮಾಡ್ತಾ ಅಭಿನಯಿಸುವುದನ್ನು ಗಮನಿಸಬಹುದು.

2. ಈ ಧಾರಾವಾಹಿಯ ಮತ್ತೊಂದು drawback ಅಂದ್ರೆ ಕಾಲನಿಕ ಊರುಗಳು. ದೇವಸಾಗರ....ಅದೂ ಇದೂ ಅಂತ. ಕತೆ ಕಾಲ್ಪನಿಕ ಸರಿ; ಆದರೆ ಊರುಗಳ ಹೆಸರನ್ನಾದರೂ ಇರೋದನ್ನೇ ಬಳಸಬಹುದಿತ್ತು.

3. ಇನ್ನೊಂದು ತುಂಬಾ ಸೂಕ್ಷ್ಮವಾಗಿ ಗಮನಿಸಬಹುದಾದ ವಿಚಾರವೆಂದರೆ ಮೇಕಪ್. ಯಾವ ಪಾತ್ರದ ಕಥೆ ನಡೀತಿದಿಯೋ ಅವರಿಗೆ ಮಾತ್ರ ಮೇಕಪ್. ಉದಾಹರಣೆಗೆ ಕಲ್ಯಾಣಿ ಪಾತ್ರ. ಈ ಹುಡುಗಿ ಹಿಂಡು ಜನರ ಹಿಂದೆ ಮೂರು ಹೊತ್ತು ಅಳುಮೋರೆ ಹಾಕಿಕೊಂಡಿರುತ್ತ ಇದ್ದಳು. ನನಗಂತೂ ನೋಡೋಕೆ ಬೇಜಾರಾಗ್ತಾ ಇತ್ತು. ಮಧು ಜೊತೆ ನಿಶ್ಚಯಗೊಂದಿದ್ದ ಮದುವೆ ತಿರಸ್ಕರಿಸುವ ಎಪಿಸೋಡ್ ಗಳಲ್ಲಿ ಕಲ್ಯಾಣಿಗೆ ಚೆನ್ನಾಗಿ ಮೇಕಪ್ ಹಾಕಲಾಗಿತ್ತು. ಮೇಕಪ್ ಆತ್ಮವಿಶ್ವಾಸ ತೋರಿಸುತ್ತೆ ಅನ್ನೋ ವಿಚಾರವಿರಬಹುದು ನಿರ್ದೇಶಕರಿಗೆ.

4. ಸಿಕ್ಕಾಪಟ್ಟೆ ಮಳೆ ಬಂದಿರುತ್ತೆ....ಹೊರಗಿನಿಂದ ಒಳಗೆ ಬಂದ ಪಾತ್ರದ ಮೈಮೇಲೆ ಒಂಚೂರು ನೀರೆ ಬಿದ್ದೆರೋದಿಲ್ಲ.

5. ಮಾಲತಿ ಮೇಡಂಗೆ ಸ್ಕೂಲಿಗೆ ಹೊತ್ತಾಗಿರುತ್ತೆ ಆದರೂ ನಿವೇದಿತ ಮನೆಗೆ ಹೋಗಿ ಅದೂ ಇದೂ ಮಾತಾಡೋಕೆ ಸಮಯ ಇರುತ್ತೆ.

6. ಪದೇ ಪದೇ ರಿಪೀಟ್ ಆಗೋ ಸಂಭಾಷಣೆಗಳು. ಇದಕ್ಕೆ ಪ್ರಮುಖ ಕಾರಣ ಅನಗತ್ಯವಾಗಿ ಸಮಸ್ಯೆಗಳನ್ನು [ಎಪಿಸೋಡ್ ಗಳನ್ನು ] ರಬ್ಬರಿನಂತೆ ಎಳೆಯುವುದು.          

ಇರೋದ್ರಲ್ಲಿ TNS ಪರವಾಗಿಲ್ಲ ಸರಿ; ಆದರೂ ಎಲ್ಲದಕ್ಕೂ ಒಂದು ಕೊನೆ ಇರುತ್ತಲ್ಲ. ಸದ್ಯಕ್ಕಂತೂ ತಮ್ಮ trump card ಆದ ಕೋರ್ಟ್ ಸೀನ್ ಗಳನ್ನು ಮತ್ತೆ ತರಲು ಸಿದ್ಧರಾಗ್ತಾ ಇದಾರೆ. ಬಹುಷಃ TRP ಕಡಿಮೆ ಆಗಿರಬೇಕು. ಆದರೂ ಯಾವಾಗ ಇದರಿಂದ ಮುಕ್ತಿ?

2 comments:

Anonymous said...

TNS is good when he deals with politics. Otherwise his serials are mere emotional blackmail.

I am Naveen said...

ನನಗೆ ನೆನಪಿರೋ ಹಾಗೆ TNS ಅವರ ಕಾಲೇಜು ರಂಗ ಅನ್ನೋ ಧಾರಾವಾಹಿ ಬರ್ತಾ ಇತ್ತು. ಆಗ ನಾನು ತುಂಬಾ ಚಿಕ್ಕವನಿದ್ದೆ. ರಾಜಕೀಯ ಎಲ್ಲ ಅರ್ಥ ಆಗ್ತಾ ಇರ್ಲಿಲ್ಲ. ರಾಜಕೀಯದ ಒಳಸುಳಿಗಳನ್ನು TNS ಚೆನ್ನಾಗಿ ಪ್ರಸ್ತುತಪಡಿಸುತ್ತಾರೆ.