Thursday, April 30, 2009

ನಿಷ್ಪ್ರಯೋಜಕ ಕ್ಷಮಾಪಣೆಗಳು


ಕಳೆದ ಸೋಮವಾರ ಸರ್ವೋಚ್ಚ ನ್ಯಾಯಾಲಯ ೨೦೦೨ ರ ಗುಜರಾತ್ ಗಲಭೆಗಳಲ್ಲಿ ನರೇದ್ರ ಮೋದಿ ಮತ್ತು ಅವರ ಸಹದ್ಯೋಗಿಗಳ ಪಾತ್ರದ ಬಗ್ಗೆ ವಿಶೇಷ ತನಿಖಾ ದಳ ರಚಿಸಲು ಆಜ್ನಾಪಿಸಿದಾಗ, ಮೋದಿ ಯವರ ರಾಜಕೀಯ ಶತ್ರುಗಳು ಅವರಿಂದ ಕ್ಷಮಾಪಣೆ, ರಾಜೀನಾಮೆ ಅಥವಾ ಎರಡನ್ನು ಬಯಸಿದ್ದು ಸರಿಯಷ್ಟೇ. ವಿರೋಧಿಗಳ ಯಾವುದೇ ಬೇಡಿಕೆಗಳಿಗೆ ಒಪ್ಪಿಕೊಂಡಿದ್ದರೂ ಅವರ ಬಲೆಗೆ ಬಿದ್ದಂತೆ. ಕ್ಷಮಾಪಣೆ ಕೇಳಿದ್ದರೆ ತಪ್ಪು ನಡೆದಿದೆ ಎನ್ನುವ ಅರ್ಥ, ಇಲ್ಲದಿದ್ದರೆ ಏನು ಮುಚ್ಚಿಡುತ್ತಿದ್ದಾರೆ ಎನ್ನುವ ಅರ್ಥ. ಹಾಗಾಗಿ ಬುದ್ಧಿವಂತ ಮೋದಿ ವಿರೋಧಿಗಳ ಒತ್ತಾಯಕ್ಕೆ ಮಣಿಯದೆ ತನಿಖೆಗೆ ಸಿದ್ಧವೆಂದು ಘೋಷಿಸಿದರು. ವಿವೇಕಯುತ ತೀರ್ಮಾನಕ್ಕೆ ಒಂದು ಚಿಕ್ಕ ಉದಾಹರಣೆ. ತಪ್ಪನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿ, ನಂತರ ಬಂದೆರಗುವ ಪರಿಣಾಮಗಳನ್ನು ಎದುರಿಸಲು ಸಿದ್ಧವಿಲ್ಲದಿದ್ದರೆ ರಾಜಕೀಯ ಕ್ಷಮಾಪಣೆಗಳಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಹೊಸ ಬದಲಾವಣೆಯನ್ನು ತರುವಂತಹ ಅವಕಾಶವಿದ್ದರೆ ರಾಜಕೀಯ ಕ್ಷಮಾಪಣೆಗಳಿಗೆ ಅರ್ಥ ಬರುತ್ತದೆ.
ವಯಕ್ತಿಕ ಕ್ಷಮಾಪಣೆಗಳು ಮಾತ್ರ ಜೀವನದಲ್ಲಿ ಉತ್ತಮ ಪರಿಣಾಮಗಳನ್ನು ಕೇಳಿದವನಿಗೂ, ಪಡೆದವನಿಗೂ ಬೀರಬಹುದು. ಒಬ್ಬನು ತಪ್ಪು ಮಾಡಿ ಕ್ಷಮೆ ಕೇಳಿದರೆ ಮತ್ತೊಬ್ಬನು ಅವನನ್ನು ಕ್ಷಮಿಸಬಹುದು. ಕ್ಷಮಿಸದಿದ್ದರೂ ತಪ್ಪು ಒಪ್ಪಿಕೊಂದಂತಹ ತೃಪ್ತಿ ನಮ್ಮಲ್ಲಿ ಉಳಿಯುತ್ತದೆ. ಅದಕ್ಕೆ ವಿರುದ್ಧವಾಗಿ ರಾಜಕೀಯ ಕ್ಷಮಾಪಣೆಗಳು ಯಾವುದೇ ರೀತಿಯಾದ ಪರಿಣಾಮಗಳನ್ನು ಕೇಳಿದವರ ಮೇಲೂ, ಬಯಸಿದವರ ಮೇಲೂ ಬೀರುವ ಪರಿಣಾಮ ಅಷ್ಟಕಷ್ಟೇ.
ಬಾಬರಿ ಮಸೀದಿ ಕೆಡವಿದ ಬಗ್ಗೆ ಅದ್ವಾನಿಯವರು "ನನ್ನ ಜೀವನದಲ್ಲಿ ಅತ್ಯಂತ ದು:ಖದ ದಿನ" ಎಂದು ಕೆಡವಿದ ದಿನ ಹೇಳಿದ್ದರೂ, ನಂತರ ಹೇಳಿದ್ದರೂ ಅವರನ್ನು ಕೋಮುವಾದಿ ಎಂದು ಕರೆಯುವ ವಿರೋಧಿಗಳ ಧ್ವನಿ ತಗ್ಗುತ್ತಿರಲಿಲ್ಲ. ಜಾತ್ಯತೀತ ಶಕ್ತಿಗಳು ಈಗಲೂ ಹಾಗೆ ಕರೆಯುತ್ತವೆ. ಸಂಘಪರಿವಾರ ಈ ಕ್ಷಮಾಪಣೆಯಿಂದ ಅವರನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದೆ. ಇದರಿಂದ ಅದ್ವಾನಿಯವರು ರಾಜಕೀಯವಾಗಿ ಒಂಟಿಯಾದರೆ ಹೊರತು ಹೆಚ್ಚೇನು ಸಂಭವಿಸಲಿಲ್ಲ.
ಇನ್ನು ೧೯೮೪ ರಲ್ಲಿ ನಡೆದ ಸಿಖ್ ನರಮೆಧಕ್ಕೆ ಸಂಭಂಧಿಸಿದಂತೆ ಸ್ವತಹ ಸಿಖ್ ಆದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಕೇಳಿದ ಕ್ಷಮಾಪಣೆ. ಆದರೆ ಈ ವಿಚಾರವನ್ನು ಕೂಲಂಕುಶವಾಗಿ ನೋಡಿದಾಗ ನಮಗೆ ತಿಳಿಯುವ ವಿಚಾರವೆಂದರೆ "ತಪ್ಪು ಯಾರದ್ದೋ, ಕ್ಷಮೆ ಕೇಳಿದ್ದು ಯಾರೋ" ಎಂಬುದು. ಸಿಖ್ ನರಮೆಧಕ್ಕೆ ಸಂಭಂದಿಸದಂತಹ ಒಬ್ಬ ವ್ಯಕ್ತಿ ಕ್ಷಮೆ ಕೇಳುತ್ತಿದ್ದಾರೆ ಅದೇ ಪಕ್ಷ ತಾನು ಆ ಘಟನೆಗೆ ಕಾರಣವಲ್ಲ ಎಂಬ ಹೇಳಿಕೆ ನೀಡುತ್ತಿತ್ತು. ಮತ್ತೊಮ್ಮೆ ಸಿಖ್ ರ ಕೋಪ ಕೆರಳುವವರೆಗೂ ಕಾಂಗ್ರೆಸ್ಸ್ ಪಕ್ಷ ಘಟನೆಯಲ್ಲಿ ಪ್ರಮುಖ ಆರೋಪಿಗಳಾದ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರನ್ನು ಬೆಂಬಲಿಸುತ್ತಿತ್ತು. ಈ ಕ್ಷಮಾಪಣೆಯಿಲ್ಲದಿದ್ದರೆ ಸಾವಿರಾರು ಸಿಖ್ ರನ್ನು ಕೊಂದ ಪಕ್ಷದಲ್ಲಿ ಒಬ್ಬ ಸಿಖ್ ನಾಯಕನಾಗಿರಲು ಸಾಧ್ಯವಾಗುತ್ತಿರಲಿಲ್ಲ. ಈ ಕ್ಷಮಾಪಣೆ ಇದಕ್ಕಿಂತ ಹೆಚ್ಚಿನದೇನು ಸಾಧಿಸಿದ್ದು?
ಆದ್ರೆ ಇಲ್ಲಿ ಪ್ರಶ್ನೆ ಇರುವುದು ಕಾಂಗ್ರೆಸ್ ಕ್ಷಮಾಪಣೆ ಕೇಳುತ್ತಿರುವುದು ಯಾವುದಕ್ಕಾಗಿ ಎಂಬುದು? ಮೂರು ಸಾವಿರ ಸಿಖ್ ರನ್ನು ಕೊಲೆಮಾಡಲು ಸಹಾಯ ಮಾಡಿದ್ದಕ್ಕೆ ? ಅಥವಾ ಅವರ ಅವಧಿಯಲ್ಲಿ ಈ ದುರಂತ ನಡೆಯಿತು ಎಂಬುದಕ್ಕೋ? ಅದು ಮೊದಲಿನದ್ದಗಿದ್ದರೆ ಹಲವಾರು ಕಾಂಗ್ರೆಸ್ ನಾಯಕರು ಜೈಲಿನಲ್ಲಿರಬೇಕಗಿತ್ತು. ಮತ್ತು ರಾಜೀವ್ ಗಾಂಧಿ ಯವರು ತಾವು ಕೊಟ್ಟಂತಹ ಹೇಳಿಕೆಗಳಿಗಾಗಿ ಸಾರ್ವಜನಿಕ ಖಂಡನೆಗೆ ಒಳಗಾಗಬೇಕಿತ್ತು.
ಮೋದಿ ಯವರು ಏತಕ್ಕಾಗಿ ಕ್ಷಮೆ ಕೇಳಬೇಕು? ರಕ್ತಪಾತವನ್ನು ಅಸಹಾಯಕರಾಗಿ ನೋಡಿದ್ದಕ್ಕೆ ? ಅಥವಾ ಗಲಭೆಗಳಿಗೆ ಬೆಂಬಲ ನೀಡಿದ್ದಕ್ಕೆ ? ಮೊದಲನೆಯ ಅಪರಾಧಕ್ಕೆ ಕ್ಷಮೆ ಕೇಳುವುದು ಹೆಡ್ಡತನ . ಮೊದಿಯಂತ ಸ್ಥಾನದಲ್ಲಿರುವ ಯಾವ ರಾಜಕಾರಣಿಯೂ ಇಂತ ಕೆಲಸ ಮಾಡೋದಿಲ್ಲ. ಎರಡನೆಯದಕ್ಕೆ ಕೇಳಿದ್ದರೆ ಮೋದಿ ಇಷ್ಟುಹೊತ್ತಿಗೆ ಜೈನಲ್ಲಿ ಇರಬೇಕಾಗಿರುತ್ತಿತ್ತು. ಹಾಗಾಗಿ ಮೋದಿಯವರಿಂದ ಕ್ಷಮಾಪಣೆ ಕೇಳಿಸುವುದು ರಾಜಕೀಯ ಪಿತೂರಿ ಅಲ್ಲದೆ ಮತ್ತೇನು ಅಲ್ಲ.
ಸಾರ್ವಜನಿಕ ಕ್ಷಮಾಪಣೆಯ ಇತಿಹಾಸವನ್ನು ನೋಡಿದಾಗ ನಮಗೆ ತಿಳಿದುಬರುವುದೇನೆಂದರೆ ರಾಜಕಾರಣಿಗಳು ತಮಗೆ ಯಾವ ರೀತಿಯ ತೊಂದರೆ ಇಲ್ಲದಿದ್ದರೆ ಮಾತ್ರ ಅಪಾಲಜಿ ಕೇಳುತ್ತಾರೆ ಎಂಬುದು. ವಾಟರ್ ಗೇಟ್ ಹಗರಣ ನಡೆದಿದ್ದು ನಿಕ್ಸನ್ ಅವಧಿಯಲ್ಲಾದರೂ ಅವರನ್ನು ಕ್ಷಮಿಸಿದ್ದು ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಅವಧಿಯಲ್ಲಿ. ಬರಾಕ್ ಒಬಾಮ ಯಾವ ಅಮೆರಿಕನ್ ಕೂಡ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಪಡದಂತೆ ಎಚ್ಚರ ವಹಿಸಿದ ನಂತರವೇ CIA ಯಾ ಕಿರುಕುಳಗಳ ಬಗ್ಗೆ ಅಪಾಲಜಿ ಕೇಳಿದ್ದು. ಪ್ಯಲಸ್ತೆನಿಯರ ತಾವು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಇಸ್ರೆಲಿಯರು ಎಂದಿಗೂ ಕ್ಷಮಾಪಣೆ ಕೇಳುವುದಿಲ್ಲ.
ಕಳಿಂಗ ಯುದ್ಧದಲ್ಲಿ ಸತ್ತಂತಹ ಸಾವಿರಾರು ಜನರನ್ನು ನೋಡಿದ ಸಾಮ್ರಾಟ್ ಅಶೋಕ ಅಹಿಮ್ಸಾವಾದಿಯಾದರೂ ಅವನ ತಪ್ಪುಗಳಿಗೆ ಶಿಕ್ಷೆಯಾಗದೆ ಉಳಿಯಿತು. ತನ್ನಿಂದಾದ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟ ಅವನಿಗೆ ಶಿಕ್ಷೆ ವಿಧಿಸುವ ಅಧಿಕಾರವೆನಿದ್ದರು ಕಳಿಂಗದವರಿಗಿದ್ದಿದ್ದರೆ ಅವನು ಕ್ಷಮೆಕೇಳುತ್ತಿದ್ದನೆ? Victors do sometime apologise, but only when they need not fear of retribution.
ಅಧಿಕಾರದಲ್ಲಿರುವವರು ಕೇಳುವ ಯಾವ ಕ್ಷಮಾಪಣೆಗಳೂ ಅವರ ಹೃದಯದಿಂದ ಬಂದತಾಗಿರುವುದಿಲ್ಲ. ಕ್ಷಮಾಪಣೆ ಕೇಳುವುದರಿಂದ ಏನು ನಷ್ಟವಿಲ್ಲ ಎಂಬ ಸುಳಿವಿದ್ದರೆ ಮಾತ್ರ ಅವರು ಅದಕ್ಕೆ ಮುಂದಾಗುತ್ತಾರೆ. [ಅಶೋಕನಿಗಿಂತ ಒಳ್ಳೆ ಉದಾಹರಣೆ ಬೇರೆ ಇಲ್ಲ]. ರಾಜಕಾರಣಿಗಳು ನಿಜವಾಗಿ ಕ್ಷಮೆ ಕೇಳುವುದು ಬೇರೆ ಎಲ್ಲ ದಾರಿಗಳು ಮುಚ್ಚಿದ್ದರೆ ಅಥವಾ ತಮ್ಮ ತಪ್ಪುಗಳಿಗೆ ತಲೆ ಕೆಡಿಸಿಕೊಳ್ಳದಿದ್ದರೆ ಮಾತ್ರ. ರಾಜಕೀಯದಲ್ಲಿರುವವರಿಂದ ಅಪೇಕ್ಷಿಸಬಹುದಾದ ಉತ್ತಮ ಕ್ಷಮಾಪಣೆ ಎಂದರೆ ಅವರ ರಾಜಕೀಯ ಪ್ರಾಧಾನ್ಯತೆ ಯನ್ನು ವರ್ಗಾಯಿಸಿಕೊಳ್ಳುವುದು. ಅಡ್ವಾಣಿ ಮತ್ತು ಮೋದಿ ಇಬ್ಬರು ತಮ್ಮ ರಾಜಕೀಯ ಪ್ರಾಧಾನ್ಯತೆಯನ್ನು ಶುದ್ಧ ಹಿಂದುತ್ವದಿಂದ ಅಭಿವೃದ್ಧಿಯೆಡೆಗೆ ಬದಲಾಯಿಸಿಕೊಂಡಿದ್ದಾರೆ. ಕೇವಲ ಜಾತ್ಯಾತೀತ ಶಕ್ತಿಗಳು ಮಾತ್ರ ಅವರನ್ನು ಕ್ಷಮಿಸದೆ ಇನ್ನು ಕೋಮುವಾದದ ಕಡೆಗೆ ತಳ್ಳುತ್ತಿವೆ. ಕ್ಷಮೆ ಕೇಳುವಂತಹ ಯಾವುದೇ ಅಧಿಕಾರ ಅವುಗಳಿಗೆ ಇಲ್ಲ.


Note: tranlation of editorial from R JAGANNATHAN - DNA executive editor. Editorial dated 30/04/09

Tuesday, April 28, 2009

ನೀನ್ಯಾರೆ...ಹುಡುಗಿ?

ಪ್ರೀತಿಯ ಹುಡುಗಿ,

ಎಲ್ಲಿಯೋ ಇದ್ದು, ಹೇಳದೆ ಬಂದು, ನಿನ್ನ ನಗುವನ್ನು ಬಿಟ್ಟು ಹೊರಟುಹೊಗುತ್ತಿಯಲ್ಲ! ನೀನು ನನ್ನ ಕಾಲ್ಪನಿಕ ಹುಡುಗಿ ಎಂದು ನನಗೆ ಅನಿಸುತ್ತಿಲ್ಲ. ನಿಜವಾಗಿಯು ಅಲ್ಲೆಲ್ಲೋ ಮೂಲೆಯಲ್ಲಿ ಅಡಗಿ ನನ್ನ ಕಲ್ಪನೆ, ವಾಸ್ತವದ ಜೊತೆ ಆಟವಾದೋ ತುಂಟಿ ನೀನು. ನನ್ನ ಭಾವದ ಜೀವಸೆಲೆ ಇನ್ನೂ ಬತ್ತದಿರಲು ನಿನ್ನ ಬಗೆಗಿನ ಕನಸುಗಳೇ ಕಾರಣವೆ? ನಾಳೆಯ ಬಗೆಗಿನ ಆಲೋಚನೆಗಳಲ್ಲೇ ಮುಳುಗಿದ್ದ ನನಗೆ ನೆನೆಪಿನ ಬುಟ್ಟಿಯ ಬಿಚ್ಚಿ ಸವಿಯಲು ಹೇಳಿದ್ದು ಏಕೆ? ನೀನು ಅವಳೇನಾ...? ಅದೇ ಐದನೆಯ ತರಗತಿಯಲ್ಲಿ ಇದ್ದ ದುಂಡಗಿನ ಕಣ್ಣುಗಳ, ಪುಟ್ಟ ಪಾದಗಳ, ಪೂರಿಗೆನ್ನೆಯ ಮುದ್ದು ಹುಡುಗಿ. ಆಗ ನಿನ್ನ ಬಗೆಗೆ ಎಂಥ ಆಕರ್ಷಣೆ! ಎಲ್ಲೋ ಬಿರಿದ ಹೂವಿನ ಸುಗಂಧ ತಂಗಾಳಿಯ ಜೊತೆ ಸರಸವಾಡುತ್ತ ಮೈಲಿಗಟ್ಟಲೆ ಸವೆಸಿ ನನ್ನ ಬಂದು ತಲುಪಿ ನಿನ್ನಯ ಅರಿವನ್ನು ತಿಳಿಸುವಂತೆ. ಅಥವಾ ಹೈಸ್ಕೂಲಿನಲ್ಲಿ ಓರೆಗಣ್ಣಿನಲ್ಲಿ ನೋಡುತ್ತಾ, ಎದುರಲ್ಲಿ ಬಂದಾಗ ಜಿಂಕೆಮರಿಯಂತೆ ಬೆದರುತ್ತಾ, ಬೆನ್ನ ಹಿಂದೆ ನಾಚಿಕೆಯ ನಗು ನಕ್ಕು ಓಡುತ್ತಿದ ಸರಳ ಸುಂದರ ಹುಡುಗಿ; ಅವಳೇನಾ ನೀನು..........? ಇದ್ದರೂ ಇರಬಹುದು. ಅದು ಸುವರ್ಣಯುಗ......ದೇಹದ, ಮನಸ್ಸಿನ ಸಂದಿಗೊಂದಿಗಳಲ್ಲಿ ಪ್ರಕೃತಿಯ ಲೀಲೆಗಳ ಕಲರವ. ನಿನ್ನ ನಗುವನ್ನು ನೋಡಿದೊಡನೆ ಪ್ರತಿನಗಲು ತುಸು ನಾಚಿಕೆಯಾಗಿ ಅದೇನೋ ಗೆದ್ದೆನೆಂಬ ಸಂಭ್ರಮದಲಿ ತೇಲುವಂತೆ ಮಾಡುತ್ತಿದ ಹುಡುಗಿ ನೀನೇನಾ.? ಅಥವಾ ಕಾಲೇಜಿನಲ್ಲಿ ನಾಚಿಕೆಯ ಪರದೆಯ ಸರಿಸಿ ಗಂಟೆಗಟ್ಟಲೆ ಹರಟುತ್ತ, ನನ್ನೊಡನೆ ಜಗಳವಾಡಲು ಪ್ರತಿಕ್ಷಣ ಹಾತೊರೆಯುತ್ತಾ, ನನ್ನ ಜೋರು ಮಾತಿಗೆ ಅಳು ಮೊರೆಯ ಸೇರಿಸಿ ದೂರುತ್ತಿದ್ದವಳು ನೀನೇನಾ....? ಅಥವಾ ಜನ್ಮ ಜನ್ಮಾನ್ತರದಿಂದ ಪ್ರೀತಿಸುತ್ತಿದ್ದಂತೆ ಪ್ರೀತಿಸಿ, ಕಾರಣವ ಹೇಳದೆ ಒಮ್ಮೆಲೇ ಮರೆಯಾಗಿ, ಹಿಡಿಯಲು ಪ್ರಯತ್ನಿಸಿದರೆ ನೈದಿಲೆಯ ಮೇಲಿನ ನೀರಿನ ಮುತ್ತುಗಳಂತೆ ಕೊಳದೊಳಗೆ ಕರಗಿ ಹೋದವಳು ನೀನೇನಾ? ಹುಡುಗಿ ನೀನು ತರುವ ನೆನಪುಗಳು ಸಾವಿರ ಸಾವಿರ. ಸಾಗರದ ದಂಡೆಯಲ್ಲಿನ ಮರಳಿನ ಕಣಗಳಂತೆ. ನೀನು ನನ್ನೊಡನೆ ಇರಲು ಪ್ರತಿಸಲವೂ ಬೇರೆ ವೇಷಗಳಲ್ಲಿ ಬಂದಂತಿದೆಯಲ್ಲ. ನೀನು ನಿಜವಾಗಲೂ ಒಬ್ಬಳೆನ? ಇಲ್ಲ ಬೇರೆ ಬೇರೆನಾ? ನನ್ನ ಬದುಕಿನ ಪ್ರತಿ ಹೆಜ್ಜೆ ಇಡುವಾಗಲು ನಿನ್ನ ನೆನಪಾಗಿ, ನೀನೆ ನೆಪವಾಗಿ, ಒಮ್ಮೊಮ್ಮೆ ಮುಗ್ಗರಿಸಿ, ಸಾವರಿಸಿ ಕೂತಾಗ ತಿಳಿ ನಗೆಯ ನಕ್ಕು ನನ್ನ ಜೊತೆ ಬರುವವಳು ನೀನೆ..? ನೀನು ಸ್ಕೂಲಿನವಳೋ, ಹೈಸ್ಕೂಲಿನವಳೋ, ಕಾಲೇಜಿನವಳೋ, ನಂತರದವಳೋ ? ಪ್ರತಿಸಲ ಸಂದಿಗ್ಧದಲ್ಲಿ ಸಿಲುಕಿಸಿ ಮರೆಯಾಗಿ ಓಡುವೆ ಏಕೆ? ನೀನು ಕಲ್ಪನೆಯೋ, ವಾಸ್ತವವೋ ಹೇಳು ಹುಡುಗಿ.

Friday, April 24, 2009

ಅಣ್ಣಾವ್ರ ಹುಟ್ಟಿದ ದಿನ



ಇಂದು ನಟ ಸಾರ್ವಭೌಮ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ವಿಜೇತ ಡಾ|| ರಾಜಕುಮಾರ್ ಅವರ ೮೧ನೆ ಹುಟ್ಟಿದ ದಿನ. ಕರ್ನಾಟಕದ, ಕನ್ನಡದ ಸಾಂಸ್ಕೃತಿಕ ರಾಯಭಾರಿ. ಕನ್ನಡಿಗರಿಗೆ ತನ್ನ ಅತ್ಯುತ್ತಮ ಅಭಿನಯ ಹಾಗು ಎಂದೂ ಮರೆಯಲಾಗದಂತಹ ಚಲನಚಿತ್ರಗಳನ್ನು ಕೊಟ್ಟ ದೈತ್ಯ ಪ್ರತಿಭೆ. ತನ್ನ ವಿನಯ, ಸರಳತೆಗಳಿಂದ ಎಲ್ಲರಿಗೂ ಮಾದರಿಯಾದ ಕಲಾವಿದ. ಎಲ್ಲರಿಗು ಅಣ್ಣಾವ್ರ ಹುಟ್ಟಿದ ಹಬ್ಬದ ಶುಭಾಶಯಗಳು.