Monday, December 1, 2008

ದೇಶಕ್ಕಾಗಿ ಪ್ರಾಣ ನೀಡಿದವರಿಗೆ ನಮನ



ನಮ್ಮ ದೇಶಕ್ಕೆ ಪ್ರತಿಸಲ ಆಪತ್ತು ಬಂದಾಗ, ವಿಪತ್ತು ಬೆನ್ನೇರಿದಾಗ ನಮ್ಮ ಸಹಾಯಕ್ಕೆ, ರಕ್ಷಣೆಗೆ ಬರುವವರು ಸೈನಿಕರು ಮತ್ತು ಪೊಲೀಸರು. ನದಿಗಳು ಉಕ್ಕಿ ನೆರೆ ಬಂದಾಗ, ಶತ್ರುಗಳು ಮುಗಿಬಿದ್ದಾಗ, ಭಯೋತ್ಪಾದಕರು ಆರ್ಭಟಿಸಿದಾಗ ನಮ್ಮ ರಕ್ಷಣೆಗೆ ಧಾವಿಸಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವವರು ಸೈನಿಕರು. ಮೊನ್ನೆ ಮುಂಬೈ ನಲ್ಲಿ ನಡೆದ ಉಗ್ರಗಾಮಿಗಳ ದಾಳಿಯಲ್ಲಿ

೧) ಅಶೋಕ್ ಕಾಮ್ಟೆ
೨) ವಿಜಯ್ ಸಲಸ್ಕರ್
೩) ಹೇಮಂತ್ ಕರ್ಕೆರೆ
೪) ಸಂದೀಪ್ ಉನ್ನಿಕೃಷ್ಣನ್

ಹಾಗು ಇನ್ನಿತರ ಅನಾಮಧೇಯ ಹೀರೋಗಳು ನಮಗಾಗಿ ಪ್ರಾಣವನ್ನು ಅರ್ಪಿಸಿದ್ದಾರೆ. ಈ ಎಲ್ಲ ಧೀರರಿಗೆ ನನ್ನ ಹೃತ್ಪೂರ್ವಕ ನಮನಗಳು. ನಮ್ಮ ದೇಶ ನಿಮ್ಮ ಶೌರ್ಯವನ್ನ, ನಿಮ್ಮ ಕರ್ತವ್ಯಪ್ರಜ್ಞೆಯನ್ನ, ನಿಮ್ಮ ಸಾಹಸವನ್ನ ಹೆಮ್ಮೆಯಿಂದ ಸ್ಮರಿಸುತ್ತೇವೆ. ಇಂತಹ ಧೈರ್ಯಶಾಲಿ ಸೈನಿಕರು ಇರೋದ್ರಿಂದಲೇ ನಾವು ಇಂದು ನೆಮ್ಮದಿಯ ಜೀವನವನ್ನು ನಡೆಸುತ್ತ ಇದ್ದೇವೆ ಅಂದ್ರೆ ಅದು ಅತಿಶಯೋಕ್ತಿಯೇನಲ್ಲ.

ಆದರೆ ಪ್ರತಿಯೊಬ್ಬ ಸೈನಿಕ ಹುತಾತ್ಮನಾದಾಗ ಅವನ ಕುಟುಂಬದಲ್ಲಿ ಸೃಷ್ಠಿಯಾಗುವ ಶೂನ್ಯವನ್ನು ನಾವು ತುಂಬಲು ಸಾಧ್ಯವೇ? ತಂದೆತಾಯಿಗೆ ಮಗನನ್ನ, ಅಕ್ಕನಿಗೆ ತಮ್ಮನನ್ನ, ತಂಗಿಯರಿಗೆ ಅಣ್ಣನನ್ನ, ಹೆಂಡತಿಗೆ ಗಂಡನನ್ನ ಕಳೆದುಕೊಂಡ ದುಃಖವನ್ನು ಕಿಂಚಿತ್ತಾದರೂ ಭರಿಸಲು ನಮಗೆ ಸಾಧ್ಯವೇ? ನಮ್ಮ ಕರ್ತವ್ಯ ಅವರಿಗೆ ಸಲ್ಯೂಟ್ ಹೊಡೆಯುವುದರಲ್ಲೇ ಮುಗಿದು ಹೋಗುತ್ತಾ ಇದೆಯಲ್ಲ ಅನ್ನೋ ಭಾವ ನನ್ನನ್ನ ಕಾಡ್ತಾ ಇದೆಯಲ್ಲ?

3 comments:

Rajesh Manjunath - ರಾಜೇಶ್ ಮಂಜುನಾಥ್ said...

No idea... whether it's our helplessness or failure. We should feel shame for voting and electing such a worst political leaders, who made our lives hell today.

Harsha said...

but our memory is so less....do we know what happenned to those whodied after BOmabyshoot out or after SATYAM's fraud or evenwhathappenned with Jailalitha's corruption cases .... publc's memory is so less

ನವೀನ್ said...

thats true..............I accept it