Friday, February 22, 2008

I dropped one and a half hour early at airport

I dropped one and a half hour early at airport for my FIRST AIR travel. I along with my colleague Shreevathsan headed to Hyderabad for project work. It was drizzling in the early morning. Kingfisher ವಿಮಾನದಲ್ಲಿ ನಮ್ಮ ಟಿಕೆಟುಗಳು book ಆಗಿದ್ದವು. Boarding pass ತಗೊಂಡು ನಿರಿಕ್ಷಣಾ ಕೊಠಡಿಯಲ್ಲಿ ಕುಳಿತ ನಮಗೆ ಕೆಂಪು ಸುಂದರಿಯರ [Kingfisher Airhostess] ನುಣುಪಾದ ಕಾಲುಗಳನ್ನು ನೋಡ್ತಾ Security Check ಮುಗಿದದ್ದೇ ತಿಳೀಲಿಲ್ಲ. ಈ ದಿನಗಳಲ್ಲಿ ವಿಮಾನ ಪ್ರಯಾಣ ಭಾರಿ ವಿಶೇಷವಲ್ಲದಿದ್ದರೂ ನನಗೆ ಮೊದಲ ಅನುಭವ ಆಗಿತ್ತು. ಮೊದಲನೆಯ ಅನುಭವಗಳೆಲ್ಲ ತುಂಬ exciting ಆಗಿರುತ್ತವೆ ಅನ್ನೋದು ಎಲ್ಲ ಅನುಭವಸ್ತರಿಗೆ ಗೊತ್ತಿರೋ ವಿಚಾರಾನೆ. ವಿಮಾನ ಏರಿದ ಮೇಲೆ ಗಗನ ಸಖಿಯರು ತಂದು ಕೊಟ್ಟ ತಿಂಡಿ ತಿಂದು ಮುಗಿಸುವ ಹೊತ್ತಿಗೆ ಹೈದರಾಬಾದ್ ತಲುಪಿಯಾಗಿತ್ತು. ಒಂದು ಗಂಟೆಯ ಪ್ರಯಾಣ ಕೆಲವೇ ಕ್ಷಣಗಳಂತೆ ಭಾಸವಾಗಿದ್ದರ ಹಿನ್ನೆಲೆಯಲ್ಲಿ Kingfisher ಸುಂದರಿಯರ ಕೈವಾಡ ಇರಬಹುದೇನೋ ಅನ್ನೋ ಶಂಕೆ ನನ್ನು ಇನ್ನು ಕಾಡ್ತಾ ಇದೆ.

Hydrabaad airport ನಿಂದ ಹೊರಬಂದ ನಂತರ ನಮ್ಮನ್ನು ಕರೆದೊಯ್ಯಲು ಬರಬೇಕಿದ್ದ ವ್ಯಕ್ತಿಗಾಗಿ bus stopನಲ್ಲಿ ಕಾಯತೊಡಗಿದೆವು. ಅಲ್ಲಿ ನಿಂತಿರುವಾಗ ನನ್ನ ಮನಸ್ಸು ಬೆಂಗಳೂರನ್ನು ಮತ್ತು ಹೈದರಬಾದನ್ನು compare ಮಾಡಲು ಶುರು ಮಾಡಿಕೊಂಡಿತು. my first observation was about Common people; People in Hydrabaad are much more relaxed than bangaloreans. They were not in hurry to board a bus or getting an auto. they were calm and relaxed. ಆಟೋದಲ್ಲಿ ಹೋಗ್ತಾ ನಾನು ಗಮನಿಸಿದ ಇನ್ನೊದು ಅಂಶ ಅಲ್ಲಿನ ವಿಶಾಲ ಅನ್ನಬಹುದಾದಂತ [ಬೆಂಗಳೂರಿನ ರಸ್ತೆಗಳಿಗೆ ಹೋಲಿಸಿದರೆ] ರಸ್ತೆಗಳು. ಹೈದರಾಬಾದ್ weather ಬಗ್ಗೆ ಬೇರೆಯವರು ಹೇಳಿದ್ದ ಮಾತು ಕೇಳಿ ಬಿಸಿಯಾಗಿದ್ದ ನನ್ನ ತಲೆ ಅಲ್ಲಿನ ತಂಗಾಳಿಗೆ ತಂಪಾಗತೊಡಗಿತು. ತಮಿಳ್ನಾಡಿನಲ್ಲಿ ತಮಿಳು ಗೊತ್ತಿರಲೇಬೇಕು, ಕೇರಳದಲ್ಲಿ ಮಲಯಾಳಂ ಗೊತ್ತಿರಬೇಕು ಅನ್ನೋ ಪರಿಸ್ಥಿತಿ AP ನಲ್ಲಿ ಇಲ್ಲ. ಎಲ್ಲರಿಗೂ ಹಿಂದಿ ಮಾತಾಡಲು ಬರುತ್ತೆ ಅಥವಾ ಅರ್ಥನಾದರೂ ಆಗುತ್ತೆ. Communication was not at all a problem. ಆದ್ರೆ ಹೈದರಾಬಾದ್ನಲ್ಲಿ ನಾನು ಇದ್ದದ್ದು ಮೊದನೆಯ ಮತ್ತು ಕೊನೆಯ ದಿನಗಳು ಮಾತ್ರ. ಯಾಕೇಂದ್ರೆ ಮಧ್ಯದ ಒಂಬತ್ತು ದಿನಗಳು ನಾನು ಬೇರೆ ಬೇರೆ ಊರಿನಲ್ಲಿ ಕಳೆದೆ. ಹಾಗಾಗಿ ಹೈದರಾಬಾದ್ ಸಿಟಿಯನ್ನು explore ಮಾಡೋಕೆ ಸಾಧ್ಯವಾಗಲಿಲ್ಲ. ನಾನು ನೋಡಲೇಬೇಕು ಅಂತ ಅಂದುಕೊಂಡ ಒಂದು place ಚಾರ್ ಮಿನಾರ್. ಚಾರ್ ಮಿನಾರ್ ನೋಡದಿದ್ರೆ ನನ್ನ Hydrabaad stay ಅಪೂರ್ಣ ಅನ್ನೋ ಭಾವನೆ ನನ್ನಲ್ಲಿ ಮೊಳೆತಿತ್ತು. ಮೂರು ದಿನದಿಂದ ಶ್ರೀವತ್ಸನ ತಲೆ ತಿಂತ ಇದ್ದೆ. ಕೊನೆಗೂ ನನ್ನ ಆಸೆ 15th ಫೆಬ್ರವರಿ ಶುಕ್ರವಾರ ನೆರವೇರಿತು. ಸಂಗರೆಡ್ಡಿ ಇಂದ ಬೆಳಿಗ್ಗೆ ಹೊರಟು 11:30Am ಕ್ಕೆ ಹೈದರಾಬಾದ್ ತಲುಪಿದೆವು. Bus stand ನಿಂದ ನೇರವಾಗಿ ಚಾರ್ ಮಿನಾರ್ ಗೆ ಕೇವಲ 15 ನಿಮಿಷದ ಪ್ರಯಾಣ. ಸುಮಾರು 2 ಗಂಟೆಗಳ ಕಾಲ ಅಲ್ಲಿ ಇದ್ದು, ಫೋಟೋ ತೆಗೆಸಿಕೊಂಡು, ಅಲ್ಲೇ ಇರುವ jewellary shop ನಲ್ಲಿ ಮುತ್ತುಗಳನ್ನು ಕೊಂಡುಕೊಂಡು ಏರ್ಪೋರ್ಟ್ ಕಡೆಗೆ ಹೆಜ್ಜೆ ಹಾಕಿದೆವು. ಇನ್ನೊದು ವಿಷ್ಯ ಹೇಳೋಕೆ ಮರೆತಿದ್ದು ಅಂದ್ರೆ ನಾವು ಅಲ್ಲಿನ ಪ್ರಖ್ಯಾತ ಕರಾಚಿ ಬೆಕರಿಗೆ ಭೇಟಿ ನೀಡಿದ್ದು. ಆದ್ರೆ ನನ್ನ colleague ಉಮಾ ಹೇಳಿದ್ದ ಕರಾಚಿ ಮೆಹಂದಿ ತರೋಕೆ ನನಗೆ ಮರೆತುಹೋಯಿತು. ಈ ವಿಚಾರದಲ್ಲಿ ಅವಳನ್ನು ನಾನು disappoint ಮಾಡಿದೆ. ನಿಜ ಹೇಳಬೇಕೂನ್ದ್ರೆ ಒಂದು ವಾರದ ನಂತರ ಬೆಂಗಳೂರನ್ನು ನಾವಿಬ್ರು ತುಂಬ miss ಮಾಡಿಕೊಳ್ಳುತ್ತ ಇದೀವಿ ಅನ್ನೋ ಭಾವನೆ ಶುರುವಾಯಿತು. ಹಾಗಾಗಿ ಇನ್ನು ನಾಲ್ಕಾರು ದಿನಗಳ ನಂತರ ಹೊರಡಬೇಕಿದ್ದ ನಾವು ಬೇಗನೆ ಎಲ್ಲ ಕೆಲಸಗಳನ್ನು ಮುಗಿಸಿ ತರಾತುರಿಯಲ್ಲಿ hometown ಗೆ ಹೊರಟೆವು. ಸಂಜೆ ೭:೩೦ ಬೆಂಗಳೂರಿನಲ್ಲಿ ಇಳಿದಾಗಲೇ ಮನಸ್ಸು ನಿರಾಳವಾಗಿದ್ದು.