Thursday, November 19, 2009

BBMP ದೂರು ಈಗ ಆನ್ ಲೈನ್.........

ಒಂದಿಷ್ಟು ಜನಸಂಖ್ಯೆ ಹೆಚ್ಚಿ, ಹಲವು ಬಡಾವಣೆಗಳು ಹುಟ್ಟಿ, ಚಿಕ್ಕ ಪುಟ್ಟ ಊರುಗಳೆಲ್ಲ ನಗರ, ಪಟ್ಟಣಗಳೆಂಬ ಹಣೆಪಟ್ಟಿ ಹಚ್ಚಿಕೊಂಡ ಮೇಲೆ ಅಲ್ಲೊಂದಿಷ್ಟು ಸಮಸ್ಯೆಗಳು ಹುಟ್ಟಿಕೊಳ್ಳೋದು ಸಹಜ. ಅದರಲ್ಲೂ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ರಸ್ತೆ, ಚರಂಡಿ, ತ್ಯಾಜ್ಯ ನಿರ್ವಹಣೆ, ವಿದ್ಯುತ್, ನೀರು ಸರಬರಾಜು ಇತ್ಯಾದಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನೆಲ್ಲಾ ನಿರ್ವಹಿಸುವ ಹೊಣೆಹೊತ್ತ ಬೃಬೆ0ಮಪ(BBMP) ಅಧಿಕಾರಿಗಳ ನಿರ್ಲಕ್ಷತನದಿಂದಲೋ, ಗುತ್ತಿಗೆದಾರರ ಸೋಮಾರಿತನದಿಂದಲೋ ಹಲವು ಕೆಲಸಗಳು ನೆನೆಗುದಿಗೆ ಬಿದ್ದಿರುದು ಎಲ್ಲರಿಗು ತಿಳಿದಿದೆ. ಈ ಅಸಮರ್ಪಕ ನಿರ್ವಹಣೆ ಅನೇಕರಲ್ಲಿ ಸಿಟ್ಟು ತಂದಿರಬಹುದಾದರೂ ಅದರ ಬಗ್ಗೆ ದೂರು ನೀಡುವವರು ತುಂಬಾ ಕಡಿಮೆ. ನಾನು ಗಮನಿಸಿದ ಹಾಗೆ ದೂರು ನೀದುವವರೆಲ್ಲರೂ ಮಧ್ಯವಯಸ್ಸನ್ನು ದಾತಿದವರೇ ಹೆಚ್ಚು. ಯುವಕರಿಗೆ ಇಂತಹ ವಿಚಾರಗಳು ಮನಸ್ಸಿಗೆ ಬಂದರೂ ಅವು ಸ್ನೇಹಿತರ ನಡುವೆ ಚರ್ಚಿಸುವ ವಿಚಾರಾಗಳಾಗಿ ಮಾತ್ರ ಉಳಿದಿವೆ. ಯಾಕೆಂದರೆ ಅವರಿಗೆ ವ್ಯವಸ್ಥೆ ಯಲ್ಲಿ ಇರದಿರುವ ನಂಬಿಕೆ. ಹೀಗೆ ದೂರು ನೀಡಬೇಕೆಂದು ಮನಸ್ಸಿಗೆ ಬಂದರೂ, ಕೈಕಟ್ಟಿ ಕುಳಿತವರಿಗೆ ಒಂದು ಆಶಾದಾಯಕವಾದ ಸುದ್ದಿ.



 ನಾಗರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆನ್ ಲೈನ್ ಮೂಲಕ ನೇರವಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಬಹುದು ಅಲ್ಲದೇ, ಎಸ್ಎಂಎಸ್ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದಾಗಿದೆ.

 


ನಿಮ್ಮ ಬಡಾವಣೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ BBMP ಯ ನೂತನ ವೆಬ್ಸೈಟ್  www.spandana.kar.nic.in ನಲ್ಲಿ ದೂರು ದಾಖಲಿಸಬಹುದು. ಈ ವೆಬ್ಸೈಟ್ ನಲ್ಲಿ ನಿಮ್ಮ ದೂರಿಗೆ ಸಂಬಂಧ ಪಟ್ಟ ಛಾಯಾಚಿತ್ರಗಳನ್ನು ಮತ್ತು ವೀಡಿಯೊಗಳನ್ನೂ ಕಳುಹಿಸಬಹುದು.



ಇಂಟರ್ನೆಟ್ ಉಪಯೋಗಿಸಲು ಗೊತ್ತಿಲ್ಲದೇ ಇರುವವರು ಮೊಬೈಲ್ ಸಂಖ್ಯೆ 94818 44444 ಗೆ ಎಸ್ಎಂಎಸ್ ಕಳುಹಿಸಬಹುದು. ದಾಖಲಿಸಿದ ದೂರು ಅಧಿಕಾರಿಗಳ ಗಮನಕ್ಕೆ ಬಂದಿದೆಯೇ ಎಂದು ತಿಳಿದುಕೊಳ್ಳಲು ನಿಮ್ಮ ದೂರಿನ ಸಂಖ್ಯೆಯನ್ನು ಎಸ್ಎಂಎಸ್ ಮಾಡಬಹುದು ಅಥವಾ ವೆಬ್ಸೈಟ್ ನಲ್ಲಿ ನೋಡಬಹುದು. ಬೆರಳ ತುದಿಗೆ ಮಾಹಿತಿ ದೊರೆಯುತ್ತಿರುವಾಗ ಇನ್ನು ತಡವೇಕೆ, ಸೋಮಾರಿತನವೇಕೆ. ವ್ಯವಸ್ಥೆಯನ್ನು ದೂರುವುದು ಬಿಟ್ಟು ಕಾರ್ಯಪ್ರವೃತ್ತರಾಗೋಣ. ಥ್ಯಾಂಕ್ಸ್ BBMP. ಥ್ಯಾಂಕ್ಸ್ ಭರತ್ ಲಾಲ್ ಮೀನಾ.    

Monday, November 16, 2009

ಸಚಿನ್ ಮತ್ತು ನಾನು

He came.............




He Saw....................




He conquered..........




ಪ್ರಪಂಚದಲ್ಲಿರೋ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳಲ್ಲಿ ನಾನೂ ಒಬ್ಬ. ನನಗೆ ಕ್ರಿಕೆಟ್ ಆಡೋದಕ್ಕಿಂತ ನೋಡೋದರಲ್ಲಿ ಆಸಕ್ತಿ ಜಾಸ್ತಿ. ಆದರೆ ನಾನು ಈ ಕ್ರಿಕೆಟ್ ನ ಅಂಕಿ ಅಂಶಗಳಿಂದ ದೂರ. ಯಾರು,  ಯಾವಾಗ, ಎಲ್ಲಿ, ಹೇಗೆ, ಯಾರ ವಿರುದ್ಧ, ಯಾವತರಹದ ಕಂಡೀಶನ್ನಲ್ಲಿ ಏನೇನು ಸಾಧನೆ ಮಾಡಿದರೂ ಅನ್ನೋದೆಲ್ಲ ನನಗೆ ಜ್ಞಾಪಕ ಇರೋದಿಲ್ಲ. I am just a plain cricket fan. ಕ್ರಿಕೆಟ್ ನ ನಾನು ಗಮನಿಸೋದು ಹೆಚ್ಚಾಗಿ ಭಾರತ ತಂದ ಆಡ್ತಾ ಇದ್ರೆ ಮಾಡ್ತಾ. ಅದೂ ಪಂದ್ಯ ಅಥವಾ ಸರಣಿ ಗೆಲ್ಲೋ ಅವಕಾಶ ಇದ್ದಾಗ ಮಾತ್ರ. ಏಕೋ ಏನೋ ಭಾರತ ತಂದ ಸೋಲೋದು ನೋಡೋಕೆ ನನಗೆ ಆಗೋಲ್ಲ. I hate failure. ಇದು sportsmanship ಅಲ್ಲದೆ ಇರಬಹುದು. ಆದರೆ ನಾನು ಇರೋದೇ ಹೀಗೆ.

ಶೀರ್ಷಿಕೆ ನೋಡಿದರೆ ನನಗೂ ಸಚಿನ್ಗೂ ಏನೋ ಭಾರಿ ನೆಂಟಸ್ತನ ಇರೋರತರ ಇದೆ. ಆದರೆ ಹಾಗೇನೂ ಇಲ್ಲ ಬಿಡಿ. ಸಚಿನ್ ತನ್ನ ಕ್ರಿಕೆಟ್ ಜೀವನದ ೨೦ ವರ್ಷಗಳನ್ನು ಮುಗಿಸಿದ್ದಾಗಿದೆ. ಮಾಧ್ಯಮಗಳಲ್ಲಿ ಬೇಕಾದಷ್ಟು ವರದಿಗಳು, ಸಂದರ್ಶನಗಳು ಬಂದಿವೆ. ನನ್ನದೊಂದಿಷ್ಟು ಅಭಿಪ್ರಾಯಗಳು.......

1. ನಾನೊಬ್ಬ ಸಚಿನ್ ಅಭಿಮಾನಿ.
2. ನಾನೇನಾದ್ರು ಕ್ರಿಕೆಟ್ ನೋಡ್ತೀನಿ ಅಂದ್ರೆ ಅದಕ್ಕೆ ಸಚಿನ್ನೇ ಕಾರಣ.
3. ಪ್ರತಿ ಸಲ ಸಚಿನ್ ಬ್ಯಾಟಿಂಗ್ ಮಾಡುವಾಗ ಸೆಂಚುರಿ ಹೊಡೆಯಲಿ ಅಂತ ಬಯಸುತ್ತೀನಿ.
4. 100 (Test+ODI ಸೇರಿ)  ಸೆಂಚುರಿಗಳನ್ನು ದಾಟಬೇಕೂಂತ  ನನಗೆ ಆಸೆ.
5. ಸಚಿನ್ ಸೆಂಚುರಿ ಹೊಡೆದಾಗಲೆಲ್ಲ ಭಾರತ ತಂಡ ಸೋಲುತ್ತೆ ಅನ್ನೋದನ್ನು ನಾನು ಒಪ್ಪೋದಿಲ್ಲ.
6. No doubt he is icon of world sports.

ಕ್ರೀಡಾ ಜೀವನದ 20 ವರ್ಷಗಳನ್ನು ಪೂರೈಸಿದ್ದಕ್ಕೆ ಸಚಿನ್ ಗೆ ಅಭಿನಂದನೆಗಳು. ಕ್ರಿಕೆಟ್ ಬಗ್ಗೆ ಇರುವ ಒಲುಮೆ, ಉತ್ಸಾಹ ಹೀಗೆ ಇರಲಿ. ಇನ್ನಷ್ಟು ದಾಖಲೆಗಳು ಮೂಡಿಬರಲಿ. Keep playing......All the Best.  

Wednesday, November 11, 2009

ನೀ ಬರುವುದ ತಪ್ಪಿದ್ದೆ.............

ಪ್ರತಿರಾತ್ರಿ ಪ್ರತಿಕನಸಲೂ
ನೋಡಿರುವೆ ನಿನ್ನನೆ

ಕೋಟಿ ದೂರವ ದಾಟಿ
ಮನದಿ ಭಾವನೆಗಳ ಮೀಟಿ
ಸುಳಿದಾಡಿದೆ ನೀ
ಸನಿಹ
ಪ್ರತಿದಿನ

ಪ್ರೀತಿ ಹೃದಯದಿ ಹುಟ್ಟಿ
ಮರವಾಗಿ 
ನಂಬಿಕೆಯ ಬೇರು ಆಳಕ್ಕಿಳಿದು
ನವಿರು ಪ್ರೇಮದ ನೆರಳು
ಬೀಳುವ ಮೊದಲೇ
ನೀ ಬರುವುದ ತಪ್ಪಿದ್ದೆ
ನಾ ಅದನೆ ಅಪ್ಪಿದ್ದೆ

-- ನವೀನ್ ಕೆ.ಎಸ್.